ಯಾರು ಹಿತವರು?

ಯಾರು ಹಿತವರು?

ನಾವು ಸಮಾಜದಲ್ಲಿ ಎರಡು ರೀತಿಯ ಜನರನ್ನು ಕಾಣುತ್ತೇವೆ. ಕಾಲದ ಜೊತೆಗೆ ಅದರ ಸರಿಸಮನಾಗಿ, ಕೆಲವೊಮ್ಮೆ ಕಾಲನಿಗಿಂತಾ ಮುಂದೂ ನಡೆಯುತ್ತಾ ಕಾಲನ ಎಲ್ಲಾ ಬದಲಾವಣೆಗಳಿಗೆ ಒಗ್ಗಿಕೊಂಡು ವೇಗವಾಗಿ ಸಾಗುವ ಚುರುಕಿನವರು ಒಂದು ಗುಂಪಿನವರಾದರೆ, ಯಾವುದು ಏನೇ ಆಗಲಿ ತಟಸ್ಥವಾಗಿ, ಕಾಲನೊಂದಿಗೆ ಬದಲಾವಣೆಗೆ ಸ್ಪಂದಿಸದೆ, ತನಗೆ ಬೇಕಾದ್ದನ್ನು ಮಾತ್ರ ಬದಲಿಸಿಕೊಂಡು, ಒಂದು ರೀತಿಯಲ್ಲಿ ಕಾಲನ ಗತಿಗಿಂತಾ ತುಂಬಾ ಹಿಂದೆಯೇ ಉಳಿದುಬಿಡುವ ಸೋಮಾರಿಗಳು ಇನ್ನೊಂದು ಗುಂಪಿನವರು. ಇವರಿಬ್ಬರಲ್ಲಿ ನಿಜವಾಗಿಯೂ ನಮಗೆ ಉಪಯುಕ್ತರು ಯಾರು? ಅನುಪಯುಕ್ತರು ಯಾರು? ಒಂದು ರೀತಿಯಲ್ಲಿ ಇಬ್ಬರೂ ಅನುಪಯುಕ್ತರು! ಇನ್ನೊಂದು ರೀತಿಯಲ್ಲಿ ಇಬ್ಬರೂ ಉಪಯುಕ್ತರು. ಸೋಮಾರಿಯೂ ಸಮಾಜಕ್ಕೆ ಹೇಗೆ ಉಪಯುಕ್ತ ಎನ್ನುವುದನ್ನು ಕವಿ ಎಚ್. ಎಸ್. ಬಿಳಿಗಿರಿ ಯವರು ತಮ್ಮ ಕವನದಲ್ಲಿ ಸೊಗಸಾಗಿ ವರ್ಣಿಸಿದ್ದಾರೆ.
Kushi Dukka
ಪಾದರಸವು ದಿಟ, ಚುರುಕ ತವರೂರು!
ಏನುಪಯೋಗವೋ? ಬಿದ್ದರೆ ಚೂರು!
ಬೆಣ್ಣೆಯು ಜಗೆದೊಳು ಮೊದ್ದಿನ ಮುದ್ದೆ
ನೆಲಕ್ಕೆ ಬಿದ್ದರೂ ಒಡೆವುದೇ ಪೆದ್ದೆ?
ಇನ್ನೇತಕೆ ಬರಿ ಚರ್ಚೆಯು ಸಾಕು
ಓಡುವಿಳೆಗೆ ಸೋಮಾರಿಯೇ ಬ್ರೇಕು!

ಎನ್ನುತ್ತಾರೆ. ಮೇಲುನೋಟಕ್ಕೆ ತಮಾಷೆಯಾಗಿ ಕಂಡರೂ ಆಳಕ್ಕಿಳಿದು ವಿವೇಚಿಸಿದಾಗ ಅದರಲ್ಲೊಂದು ತತ್ವ ಅಡಗಿರುವುದು ಕಾಣುತ್ತದೆ. ಚುರುಕಿನವರು ಕಾಲನ ಜೊತೆಗೆ ಓಡುವ ಅವಸರದಲ್ಲಿ ಸರಿ-ತಪ್ಪುಗಳ ವಿವೇಚನೆಯಿಲ್ಲದೆ ನಡೆದು ಪಾದರಸವು ಬಿದ್ದಾಗ ಚೂರಾಗುವಂತೆ ವ್ಯಕ್ತಿತ್ವವನ್ನು ಚೂರಾಗಿಸಿಕೊಂಡು ಹುಡಿಯಾಗಿ ಹೋಗುತ್ತಾರೆ. ಅದೇ ಸೋಮಾರಿಗಳು ಬೆಣ್ಣೆಯಂತೆ ಕೆಳಗೆ ಬಿದ್ದರೂ ಒಡೆಯುವುದಿಲ್ಲ! ಅವರ ಸೋಮಾರಿತನದಿಂದ ತಮ್ಮ ವ್ಯಕ್ತಿತ್ವಕ್ಕೆ ಎಂದೂ ಧಕ್ಕೆಯಾಗುವುದಕ್ಕೆ ಬಿಡುವುದಿಲ್ಲ. ಹೀಗೇ ಲಂಗುಲಗಾಮಿಲ್ಲದೇ ಓಡುವ ಹುಚ್ಚು ಕುದುರೆಯೆಂಬ ಇಳೆಗೆ ಸೋಮಾರಿಗಳು ಬ್ರೇಕ್ ಹಾಕುತ್ತಾರೆ ಎನ್ನುತ್ತಾರೆ ಕವಿ.

ಪ್ರಿಯ ಸಖಿ, ನಿನಗೆ ಆಮೆ ಮತ್ತು ಮೊಲದ ಕಥೆ ನೆನಪಾಗುತ್ತಿದೆಯೇ? ನಮ್ಮ ಹಿರಿಯರೇ ಹೇಳಿಲ್ಲವೇ ಆತುರಗಾರನಿಗೆ ಬುದ್ಧಿ ಮಟ್ಟ ಎಂದು. ಆದರೆ ಎಲ್ಲಾ ಸಮಯದಲ್ಲೂ ಸೋಮಾರಿ ಇದೇ ರೀತಿ ಉಪಯುಕ್ತನಾಗಬೇಕಾದರೆ ಅವನು ತಕ್ಕ ಸಮಯದಲ್ಲಿ, ತಕ್ಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಸದಾ ಸೋಮಾರಿಯಾಗಿ ನಿಂತಲ್ಲೇ ನಿಂತು ಬಿಟ್ಟರೆ, ಕಾಲ ಇವನನ್ನು ಬಿಟ್ಟು ಮುಂದೆ ಸಾಗುತ್ತದೆ. ಸರಿ-ತಪ್ಪುಗಳನ್ನು ವಿವೇಚಿಸಿ ಸರಿಯಾದ ಸಮಯಕ್ಕೆ ನಿರ್ಧಾರಗಳನ್ನು ತೆಗೆದುಕೊಂಡು ನಡೆಯುವವನೇ ಸದಾ ಗೆಲ್ಲುವವನು. ವಿವೇಕವಿಲ್ಲದೇ ಹುಚ್ಚಾಗಿ ಕಾಲನೊಂದಿಗೆ ಓಡುವವನೂ ಸೋಲುತ್ತಾನೆ, ಹಾಗೇ ಕಾಲನೊಂದಿಗೆ ಸ್ಪಂದಿಸದೇ ನಿಂತಲ್ಲೇ ನಿಲ್ಲುವವನೂ ಸೋಲುತ್ತಾನೆ. ಇವೆರಡರ ಮಧ್ಯದ ರೇಖೆಯಲ್ಲೇ ವಿವೇಚನೆ ಮೂಡಿ ಬರುತ್ತದೆ. ಅದನ್ನೇ ನಾವು ಕಂಡುಕೊಳ್ಳಬೇಕಿರುವುದು. ಅಲ್ಲವೇ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನೇ ಮಂಗ ಆಗಿದ್ರೆ
Next post ನನ್ನ-ನಿನ್ನ ಅಂತರ!

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys